ಪುಟಗಳು

ಶನಿವಾರ, ಜುಲೈ 19, 2014

ಪಾಠಕ್ಕೂ ಸೈ, ಆಟದಲ್ಲಿ ಎತ್ತಿದ  ಕೈ

ಕ್ರೀಡಾ ಸಾಧಕ ಸಮಾಜ ವಿಜ್ಞಾನ ಶಿಕ್ಷಕ -ಶ್ರೀ ಬೊಮ್ಮಯ್ಯ ಗಾಂವಕರ್































ಉಡುಪಿ ಜಿಲ್ಲೆ ಬೈಂದೂರು ವಲಯದ ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ ಇಲ್ಲಿ ಸಮಾಜ ವಿಜ್ಞಾನ ಸಹಶಿಕ್ಷಕರಾಗಿರುವ ಶ್ರೀ ಬೊಮ್ಮಯ್ಯ ಗಾಂವಕರ ಇವರು ಬೋಧನೆಯ ಜೊತೆಗೆ ತಮ್ಮನ್ನು ಕ್ರೀಡಾ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ
               ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾದ ಇವರು ಉಡುಪಿ ಜಿಲ್ಲೆಯಲ್ಲಿ ವಿವಿಧ ಸರಕಾರಿ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದು ಬೋಧನೆಯ ಜೊತೆಗೆ ಕ್ರೀಡೆಯನ್ನೂ ಸಹ ರೂಢಿಸಿಕೊಂಡು ರಾಜ್ಯ ಸರಕಾರಿ ನೌಕರರ ಸಂಘದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ,ಅಂತರಾಷ್ಟ್ರೀಯ ಮಟ್ಟದವರೆಗೆ (ಹತ್ತುದೇಶಗಳಲ್ಲಿ)ರಾಜ್ಯವನ್ನು ಪ್ರತಿನಿಧಿಸಿದ್ದಾರೆ.ಪೋಲ್ವಾಲ್ಟ್,,ಓಟಜಾವೆಲಿನ್ ಎಸೆತ ಹೀಗೆ ಹಲವು ಕ್ರೀಡೆಗಳಲ್ಲಿ 
ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿರುವ ಇವರು ತಮ್ಮ ಶಾಲೆಯ ವಿದ್ಯಾರ್ಥಿಗಳೂ ಸಹ ತಾಲೂಕುಜಿಲ್ಲಾ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸುವಲ್ಲಿ ತರಬೇತಿ ನೀಡುತ್ತಿದ್ದಾರೆ.ಸರಳ,ಸಜ್ಜನ ಸ್ನೇಹ ಜೀವಿಯಾಗಿರುವ ಇವರು ತಮ್ಮ ವಿಶಿಷ್ಟ ಸಾಧನೆಗಾಗಿ ಸಮಾಜದ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಕ್ಕೂ ಪಾತ್ರರಾಗಿದ್ದು ಇವರು ಇತರರಿಗೂ ಮಾದರಿ.







ಸಂಪರ್ಕ ವಿಳಾಸ
ಶ್ರೀ ಬೊಮ್ಮಯ್ಯ ಗಾಂವಕರ
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ,ಬೈಂದೂರು ವಲಯ
ಕುಂದಾಪುರ ತಾಲೂಕು.ಉಡುಪಿ ಜಿಲ್ಲೆ














ವರದಿ-ಮಹಾಬಲೇಶ್ವರ ಭಾಗ್ವತ್ 
      .ಶಿ. ಸರಕಾರಿ ಪ್ರೌಢಶಾಲೆ ಕೆದೂರು.